ಸ್ವಾವಲಂಬೀ ರೈತರ ಭೂಮಿಯಲ್ಲಿ ಸಾತ್ವಿಕ ಹಸಿರು.....
     
ತೋಟದಲ್ಲೇ ಸಾವಯವ ಗೊಬ್ಬರ
    ಕೃಷಿಯನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸುವ,ಆಹಾರವನ್ನು ವಿಷಮುಕ್ತವಾಗಿ ಬೆಳೆಯುವ,ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಲಾಲಗುಳಿಯಲ್ಲಿ ರೂಪುಗೊಂಡ ಸಾವಯವ ಗ್ರಾಮ ಯೋಜನೆ ಇಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ. ರಾಸಾಯನಿಕ ಕೃಷಿಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂಬ ಅಂಶವನ್ನು ಹೆಚ್ಚಿನ ಕೃಷಿಕರು ಅರ್ಥಮಾಡಿಕೊಂಡ ಕಾರಣ ಸಾವಯವ ಕೃಷಿಗೆ ಲಾಲಗುಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
      ಇದೀಗ ಈ ಸಾವಯವ ಗ್ರಾಮದಲ್ಲಿ 300 ಎಕರೆಗೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಒಟ್ಟೂ 102 ಕುಟುಂಬಗಳು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿವೆ. ಭತ್ತ,ಬಾಳೆ,ಅಡಿಕೆ,ತೆಂಗು,ಕಾಳುಮೆಣಸು ಮುಂತಾದ ಬೆಳೆಗಳನ್ನು ಸಾವಯವ ಕೃಷಿಗೆಂದು ಆಯ್ಕೆಮಾಡಿಕೊಂಡಿದ್ದಾರೆ. ಇದೀಗ ಇಲ್ಲಿನ ತೋಟ ಗದ್ದೆಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ `ಸಾತ್ವಿಕ' ಹಸಿರು ಕಣ್ತುಂಬುತ್ತದೆ.
        ಈ ಗ್ರಾಮಗಳ ರೈತರು ಕಳೆದ ವರ್ಷ 500 ಟನ್ ಗೂ ಹೆಚ್ಚು ಕಾಂಪೋಸ್ಟ್ ಗೊಬ್ಬರವನ್ನು ತಾವೇ ಉತ್ಪಾದಿಸಿ ತಮ್ಮದೇ ತೋಟಗದ್ದೆಗಳಿಗೆ ಬಳಸಿಕೊಂಡಿದ್ದಾರೆ. ಇಲ್ಲವಾದಲ್ಲಿ
ಸಾವಯವ ಹಸಿರು
ಪ್ರತಿ ವರ್ಷ 1 ಲಾರಿ ಗೊಬ್ಬರಕ್ಕೆ 5 ಸಾವಿರದಷ್ಟು ಹಣ ನೀಡಿ 50-60ಲಾರಿಗಳಷ್ಟು ಗೊಬ್ಬರವನ್ನು ಹೊರಗಿನಿಂದ ತರಿಸಲಾಗುತ್ತಿತ್ತು. ಈಗ ಆ ತಾಪತ್ರಯವಿಲ್ಲ.ಪ್ರತಿಯೊಬ್ಬ ಕೃಷಿಕನ ತೋಟದಲ್ಲಿಯೂ ನಾಲ್ಕೈದು ಇಂಥಹ ಕಾಂಪೋಸ್ಟ್ ತಯಾರಿಸುವ ತೊಟ್ಟಿಗಳು ಕಾಣಸಿಗುತ್ತವೆ.ಕಚ್ಚಾ ವಸ್ತುಗಳಾಗಿ ತೋಟದಲ್ಲಿಯೇ ಸಿಗುವ ಅಡಿಕೆ ಸೋಗೆಗಳು,ತೆಂಗಿನ ಗರಿಗಳು,ಹಸಿರು ಸೊಪ್ಪು,ಕಳೆ ಗಿಡಗಳು,ಬಾಳೆ ಗಿಡದ ತ್ಯಾಜ್ಯಗಳೆಲ್ಲವೂ ಇಲ್ಲಿ ತೊಟ್ಟಿಗಳನ್ನು ಸೇರಿ ಕಾಂಪೋಸ್ಟ್ ಗೊಬ್ಬರವಾಗಿ ಮತ್ತೆ ಅದೇ ಗಿಡಗಳಿಗೆ ಗೊಬ್ಬರವಾಗಿ ಬಳಕೆಯಾಗುತ್ತವೆ! ಸ್ಥಳೀಯವಾಗಿಯೇ ತಯಾರಿಸಿದ ಹಸಿರೆಲೆ ಗೊಬ್ಬರ ಬಳಸಿದ್ದರಿಂದ ಈ ರೈತರು ಸಂಪೂರ್ಣ ಸ್ವಾವಲಂಬಿಗಳಾಗಿದ್ದಾರೆ. ಬೆಳೆಯ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದು ರೈತರ ಅಭಿಪ್ರಾಯ.
      ಸಾವಯವ ಕೃಷಿಯ ಉತ್ತಮ ನಿರ್ವಹಣೆಗಾಗಿ 7 ಸಾವಯವ ಕೃಷಿಕರ ಗುಂಪನ್ನು ರಚಿಸಿಕೊಳ್ಳಲಾಗಿದೆ. ಈ ಗುಂಪಿನ ಸದಸ್ಯರು ಪ್ರತಿ 15
ದಿನಗಳಿಗೊಮ್ಮೆ  ಸಭೆಸೇರಿ ಪರಸ್ಪರ ವಿಚಾರ ವಿನಿಮಯ ಮಾಡುತ್ತಾರೆ. ಪ್ರತಿ ಗುಂಪಿನಿಂದ ಇಬ್ಬರು ಪ್ರತಿನಿಧಿಗಳು ಸಂಘದ ನಿದರ್ೇಶಕ ಮಂಡಳಿಯಲ್ಲಿದ್ದು ಸಾವಯವ ಕೃಷಿ ಅಭಿವೃದ್ಧಿಯ ಬಗ್ಗೆ ಗಮನಿಸುತ್ತಾರೆ. ಕ್ಷೇತ್ರ ಸಹಾಯಕರ ಹಾಗೂ ಯೋಜನೆಯ ಕ್ಷೇತ್ರಾಧಿಕಾರಿಗಳ ನಿರಂತರ ನೆರವು ಇದ್ದೇ ಇದೆ . ಈ ವರ್ಷದಿಂದ ಸಾವಯವ ರೈತರ
ಜಮೀನುಗಳು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ದೃಢೀಕರಣ ಗೊಳ್ಳುತ್ತಿವೆ.
ರೈತ ಗುಂಪಿನ ಸದಸ್ಯರು ಸಂರಕ್ಷಿತ ಅರಣ್ಯವನ್ನು ನಿಮರ್ಿಸುವ ಬಗ್ಗೆಯೂ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗುವ ಮೂಲಕ ಅರಣ್ಯಗಳ
ಸಂರಕ್ಷಣೆಯಲ್ಲಿಯೂ ತೊಡಗಿಕೊಂಡಿದ್ದಾರೆ.ಇದಕ್ಕೆ ಪೂರಕವಾಗಿ ಕಳೆದ ವರ್ಷ ಅರಣ್ಯ ಪ್ರದೇಶದಲ್ಲಿಯೇ ನರ್ಸರಿಯನ್ನು ನಿಮರ್ಿಸಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.
        ಸಾವಯವ ಕೃಷಿಯಿಂದಾಗಿ ಈ ಊರಿನ ರೈತರು 20 ಕ್ಕೂ ಹೆಚ್ಚು ವಿನಾಶದ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತದ ಬೀಜಗಳನ್ನು , ಸ್ಥಳಿಯ ತರಕಾರಿ ಬೀಜಗಳನ್ನು ರಕ್ಷಿಸಿದ್ದಾರೆ.
ಸಾವಯವ ಕೃಷಿಯಿಂದ ಬಹಳ ಪ್ರಯೋಜವಾಗಿದೆ. ರಾಸಾಯನಿಕ ಕೃಷಿಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಪ್ರತಿನಿತ್ಯ ದೂರದ ಪಟ್ಟಣದ ಆಸ್ಪತ್ರೆಗೆ ಓಡಾಡುವ
ತಾಪತ್ರಯ ತಪ್ಪಿದೆ. ಉದ್ಯೋಗಕ್ಕೆಂದು ಪಟ್ಟಣಗಳೆಡೆಗೆ ಮುಖಮಾಡಿ ಹೋಗಿರುವ ಅನೇಕ ಯುವಕರು ಸಾವಯವ ಗ್ರಾಮ ಯೋಜನೆ ಪ್ರಾರಂಭವಾದ ನಂತರ ಮತ್ತೆ ಹಳ್ಳಿಗಳೆಡೆಗೆ ಮರಳಿ,ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಸಾವಯವ ಕೃಷಿಕರಾದ ವೆಂಕಟ್ರಮಣ ಭಟ್ ಗೋಟಗುಳಿ,
ಗೋವಿಂದ ಗೌಳಿ, ಶ್ರೀಕಾಂತ ಮರಾಠಿ ರೈತ ಪ್ರತಿನಿಧಿಗಳಾದ ಮಹಾದೇವ ದೇಸಾಯಿ ಮುಂತಾದವರು.
`ಕೃಷಿ ತೋ ನಾಸ್ತಿ ದುಭರ್ಿಕ್ಷಂ'ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಲಾಲಗುಳಿಯ ಅಕ್ಷಯ ಜೀವನ ಆಗರ್ಾನಿಕ್(ರಿ)ಎಂಬ ಹೆಸರಿನಲ್ಲಿ ನೋಂದಾವಣಿಗೊಂಡಿರುವ ಸಾವಯವ ಗ್ರಾಮ ತಾಲೂಕಿನ ಇತರ ಗ್ರಾಮಗಳಲ್ಲೂ ಸಾವಯವ ಕೃಷಿಯ ಕಲ್ಪನೆ,ಕನಸು ಮೂಡಿಸುತ್ತಿದೆ

No comments:

Post a Comment