ಇಂಥದ್ದೊಂದು ವಿಸ್ಮಯಕ್ಕೆ ಏನೆನ್ನಬೇಕೋ ಗೊತ್ತಿಲ್ಲ.ಇವೆಲ್ಲಕ್ಕೆ ಕಾರಣವೂ ಏನೆಂದು ಸ್ಪಷ್ಟವಾಗಿ ತಿಳಿದಿಲ್ಲ.ಆದರೆ,ಯಾವ ಕೋನದಿಂದ ನೋಡಿದರೂ ಹೀಗಿರಬಹುದಾ ಎಮಬ ಕಲ್ಪನೆಯೂ ಮೂಡುವದಿಲ್ಲ.ಆದರೆ,ಇದು ಸುಳ್ಳೂ ಅಲ್ಲ.ಅಂಥ ಹಲವು ವಿಸ್ಮಯಗಳನ್ನು ಶಾಂತವಾಗಿ ತನ್ನೊಳಗೆ ಹುದುಗಿಸಿಕೊಂಡು ಇಂದಿಗೂ ಅಚ್ಚರಿ ಮೂಡಿಸುವ ಸ್ಥಳ ಬರ್ಮುಡಾ ಟ್ರಯಾಂಗಲ್
ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಯಾವ ವಸ್ತುವೂ ಉಳಿಯುವದಿಲ್ಲವಂತೆ.ಹಡಗುಗಳು ಅಲ್ಲಿಯವರೆಗೆ ಸುಸ್ಥಿತಿಯಲ್ಲಿ ಚಲಿಸುತ್ತಿದ್ದರೂ ಹತ್ತಿರ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿಬಿಡುತ್ತವೆ.ಆಗಸದಲ್ಲಿ ಹಾರಾಡುವ ಲೋಹದ ಹಕ್ಕಿಗಳು ಅದೇನೋ ಸನ್ನಿಗೊಳಗಾದಂತೆ ಏಕಾಏಕಿ ನೀರಿಗೆ ಧುಮುಕಿಬಿಡುತ್ತವೆ.ಇವಾವುದಕ್ಕೂ ಯಾಂತ್ರಿಕ ದೋಷವೆನ್ನುವಂತಿಲ್ಲ.ನೈಸರ್ಗಿಕ ವಿಕೋಪದಿಂದಲೂ ಇಂಥ ಅಪಘಾತಗಳು ನಡೆದಿರುವದಿಲ್ಲ.ಆದರೆ,ಕಣ್ಮರೆಯ ಘಟನೆಗಳು ಮಾತ್ರ ನಿಲ್ಲಲಿಲ್ಲ.

ವೈಜ್ಞಾನಿಕವಾಗಿಯೂ ಹಲವು ವಿವರಣೆಗಳನ್ನು ನಿಡಲಾಗುತ್ತದೆ.ಗಲ್ಫ್ಸ್ಟ್ರೀಮ್ ಸಾಗರ ಪ್ರವಾಹ ಅತ್ಯಂತ ಪ್ರಭಾವಶಾಲಿಯಾಗಿದ್ದು ತೇಲುವ ವಸ್ತುಗಳನ್ನು ಸುಲಭವಾಗಿ ಒಳಗೆ ಸೆಳೆದುಕೊಳ್ಳುತ್ತದೆ.ಅಲ್ಲದೆ ಪುಟ್ಟ ವಿಮಾನಗಳನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರವಾಹದ ಅಲೆಗಳಿಗಿದೆ.ಸಮುದ್ರದ ಒಳಗೆ ಉತ್ಪತ್ತಿಯಾಗುವ ನೈಸಗರ್ಿಕ ಅನಿಲಗಳೂ ಇಂಥ ಕಣ್ಮರೆಗೆ ಕಾರಣವೆಂದು ಹೇಳಲಾಗುತ್ತದೆ.ಅಲ್ಲದೆ,ಬಿಸಿನೀರಿನ ಬುಗ್ಗೆಗಳೂ ಇವಕ್ಕೆ ಕಾರಣವೆನ್ನುತ್ತಾರೆ ವಿಜ್ಞಾನಿಗಳು.
No comments:
Post a Comment